ಬಣವೆಗೆ ಬೆಂಕಿ: ತಪ್ಪಿದ ಬಾರಿ ಅನಾಹುತ

ಒಟ್ಟು ವೀಕ್ಷಣೆಗಳು :
386




ನೇಸರಗಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಬಣವಿಯೊಂದು ಸುಟ್ಟು ಕರಕಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮೋಹರೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಗ್ರಾಮದ ಕಲ್ಲಪ್ಪ ಜ್ಯೋತಿ ಎಂಬುವವರಿಗೆ ಸೇರಿದ ಬಣವಿಗೆ ನಿನ್ನೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಿದ್ದರಿಂದ ಮುಂದಾಗಬಹುದಿದ್ದ ಬಾರಿ ಅನಾಹೂತ ತಪ್ಪಿದೆ.